Wednesday 13 July 2016

ಸಮವಸ್ತ್ರ ವಿತರಣೆ


ಸರಕಾರಿ ಪ್ರೌಢಶಾಲೆ ಕುಂಜತ್ತೂರು - ಸಮವಸ್ತ್ರ ವಿತರಣೆ


ಕುಂಜತ್ತೂರು:
ಶಾಲೆಯ ಸಮವಸ್ತ್ರ ವಿತರಣೆಯ ಸಮಾರಂಭವು ಸರಕಾರಿ ಪ್ರೌಢಶಾಲೆ ಕುಂಜತ್ತೂರಿನಲ್ಲಿ ತಾರೀಕು 12-07-2016 ರ ಮಂಗಳವಾರ ನೆರವೇರಿತು. ಎಸ್.ಎಸ್.ಎ ಮಂಜೇಶ್ವರದ ಪ್ರಭಾರ ಪ್ರೋಜೆಕ್ಟ್ ಆಫೀಸರ್ ಶ್ರೀಮತಿ ರೋಜ ಅವರು ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿ ಸರಕಾರಿ ಶಾಲೆಯ ಹೆಣ್ಮಕ್ಕಳು, ಬಡವರು, ಬಿ.ಪಿ.ಎಲ್ ಕಾರ್ಡುದಾರರು, ಎಸ್.ಸಿ, ಎಸ್.ಟಿ ಮಕ್ಕಳು ‌ಇದರ ಸಂಪೂರ್ಣ ಪ್ರಯೋಜನವನ್ನು ಪಡೆದಿದ್ದಾರೆ ಎ೦ದು ತಿಳಿಸಿದರು. ಪಿ.ಟಿ.ಎ ಪ್ರಸಿಡೆಂಟ್ ಶ್ರೀ ಯು.ಎಚ್.ಅಬ್ದುಲ್ ರಹಿಮಾನ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಅಗಸ್ಟಿನ್ ಬರ್ನಾಡ್ ಅವರು ಸಮಾರಂಭದಲ್ಲಿ ಅಧ್ಯಕ್ಷರಾಗಿದ್ದರು. ಹಿರಿಯ ಅಧ್ಯಾಪಕಿ ಶ್ರೀಮತಿ ಪ್ರಸನ್ನಕುಮಾರಿ ಸ್ವಾಗತಿಸಿ, ಶ್ರೀಮತಿ ಅಮಿತಾ ವಂದಿಸಿದರು, ಉಪಾಧ್ಯಕ್ಷರಾದ ಶ್ರೀ ಕೆ.ಎ೦. ಅಬ್ದುಲ್ ಖಾದರ್ ಶುಭಾಸಂಶನೆಗೈದರು.