Tuesday 9 December 2014

Magic Show on water conservation


Magic Show on Water Conservation by Sudheer Madakkal conducted on 8-12-14. The programme was sponsored by Revenue Department, Kasaragod.

Friday 5 December 2014

Communal Harmony Rally

Communal Harmony Rally by SPC Unit on 5-12-14 from Thuminadu to Udyawara Mada. Headmaster Sri Udayashankaran.T. flagged off  and participated in the rally. Manjeshwar Sub Inspector of Police Sri Pramod felicitated on the occasion.School teachers Smt.Anitha, Sri Umesh and Sri Kishor Kumar led the rally.

Wednesday 12 November 2014


Leprosy Detection Camp sponsored by PHC,Manjeshwar held on 12-11-2014.

Friday 31 October 2014


ಶಾಲಾ ಕಲೋತ್ಸವ
ಕುಂಜತ್ತೂರು,ಒಕ್ಟೋಬರ್ 30: ಕುಂಜತ್ತೂರು ಸರಕಾರೀ ಪ್ರೌಢಶಾಲೆಯ ಕಲೋತ್ಸವವು ಒಕ್ಟೋಬರ್ 29,30 ರಂದು ಜರುಗಿತು. ಕಲೋತ್ಸವದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್.ಪಿ.ಸಿ. ಅವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀಯುತರು ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಬೇಕೆಂದು ನುಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರನ್.ಟಿ. ವಹಿಸಿದ್ದರು.ಹಿರಿಯ ಶಿಕ್ಷಕಿ ಶ್ರೀಮತಿ ಶ್ಯಾಮಲ ಹಾಗೂ ಶಿಕ್ಷಕರಾದ ಶ್ರೀ ಕಿಶೋರ್ ಕುಮಾರ್ ಶುಭಾಶಂಸನೆಗೈದರು. ಶಿಕ್ಷಕರಾದ ಶ್ರೀ ರಾಜಕುಮಾರ್ ಸ್ವಾಗತಿಸಿ ಕಲೋತ್ಸವದ ಸಂಚಾಲಕರಾದ ಶ್ರೀ ಸುರೇಶನ್ ವಂದಿಸಿದರು. ವಿದ್ಯಾರ್ಥಿನಿಯರಾದ ಸುಜ್ಞಾನ, ಪ್ರೀತಿ ಮತ್ತು ತಸ್ಲೀಮ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕ ರಕ್ಷಕ ಸಂಘದ ಮಹಾಸಭೆ
ಕುಂಜತ್ತೂರು,ಒಕ್ಟೋಬರ್ 30: ಕುಂಜತ್ತೂರು ಸರಕಾರೀ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮುಶ್ರತ್ ಜಹಾನ್ ನೆರವೇರಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್.ಪಿ.ಸಿ. ಅವರು ವಹಿಸಿ ಶಿಕ್ಷಕ ರಕ್ಷಕ ಸಂಘದ ಕಳೆದ ವರ್ಷದ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರನ್.ಟಿ. ಅವರು ಗತ ವರ್ಷದ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕರಾದ ಶ್ರೀ ರಾಜಕುಮಾರ್ ವರದಿ ಮಂಡಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಶ್ಯಾಮಲ.ಕೆ. , ಶಿಕ್ಷಕರಾದ ಶ್ರೀ ಬಾಲಕೃಷ್ಣ.ಜಿ.ಮತ್ತು ಶ್ರೀ ಕಿಶೋರ್ ಕುಮಾರ್ ವಿವಿಧ ವಿಭಾಗಗಳ ಲೆಕ್ಕಪತ್ರ ಮಂಡಿಸಿದರು. 2013-14 ನೇ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ವಿ.ಹೆಚ್.ಎಸ್..ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2014-15ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ಅಫ್ತಾಬ್.ಪಿ.ಸಿ. ಹಾಗೂ ಉಪಾಧ್ಯಕ್ಷರಾಗಿ ಶ್ರೀ ಅಬ್ದುಲ್ಲ ಅವರು ಸರ್ವಾನುಮತದಿಂದ ಆಯ್ಕೆಯಾದರು.ಶಿಕ್ಷಕರಾದ ಶ್ರೀ ರಾಕೇಶ್ ಸ್ವಾಗತಿಸಿ ಶ್ರೀ ಉಮೇಶ್ ವಂದಿಸಿದರು. ಶಿಕ್ಷಕರಾದ ಶ್ರೀ ದಿನೇಶ್.ವಿ. ಕಾರ್ಯಕ್ರಮ ನಿರೂಪಿಸಿದರು.

Thursday 30 October 2014



School Kalotsava 2014-15 held on 29.10.14 and 30.10.14.  The function is inaugurated by PTA President Sri P.C. Afthab, presided over by the Headmaster, Sri. Udayashankaran. T.  felicitations by Smt. Shyamala.K., Sri. Kishorkumar, welcome by Sri. Rajakumar, Vote of thanks by Kalotsavam convenor-Sri Suresan,anchor by Smt. Kavitha.

Wednesday 29 October 2014



PTA General Body meeting held on 23.10.2014.The top-scorers in SSLC and VHSE exams. March 2014 were honoured. Sri P.C. Afthab is unanimously selected as PTA President for the second time for the year 2014-15.Manjeshwar Grama Panchayath President Smt. Mushrath Jahan inaugurated the function. Sri Afthab presided over the function.Headmaster, Sri Udayashankaran presented the annual accounts.

Tuesday 21 October 2014





ಕುಂಜತ್ತೂರು,೨೦:ಸರಕಾರಿ ಪ್ರೌಢಶಾಲೆ ಕುಂಜತ್ತೂರಿನ ಶಾಲಾಮಟ್ಟದ ಕ್ರೀಡಾಕೂಟವು ಅಕ್ಟೋಬರ್ ೨೦, ೨೧ ನೇ ದಿನಾಂಕದಂದು ಶಾಲಾ ಆವರಣದಲ್ಲಿ ಜರಗಿತು. ಕ್ರೀಡಾಕೂಟವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮುಷ್ರತ್ ಜಹಾನ್ ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರನ್.ಟಿ. ಧ್ವಜಾರೋಹಣಗೈದು ಕ್ರೀಡಾಕೂಟಕ್ಕೆ ಚಾಲನೆಯನ್ನಿತ್ತರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಫ್ತಾಬ್ ಅಧ್ಯಕ್ಷ ಸ್ಥಾನ ವಹಿಸಿ ವಿಧ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ನುಡಿದರು. ಶಾಲಾ ಆಡಳಿತ ಸಮಿತಿ ಸದಸ್ಯರೂ ನಿವೃತ್ತ ಶಿಕ್ಷಕರೂ ಶ್ರೀ ಈಶ್ವರ.ಎಮ್. ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ರಾಜಕುಮಾರ್ ಸ್ವಾಗತಿಸಿ , ಕ್ರೀಡಾಕೂಟದ ಸಂಯೋಜಕಿಯೂ, ದೈಹಿಕ ಶಿಕ್ಷಣದ ಶಿಕ್ಷಕಿಯೂ ಆದ ಶ್ರೀಮತಿ ಅನಿತಾ ವಂದಿಸಿದರು. ಶಾಲಾ ವಿಧ್ಯಾರ್ಥಿ ಸಂಘದ ನಾಯಕ ಅಬ್ದುಲ್ ರಾಝಿಕ್ ಪ್ರತಿಜ್ಞಾ ವಿಧಿ ನೆರವೇರಿಸಿದರು. ಶಿಕ್ಷಕರಾದ ಶ್ರೀಮತಿ ಸುಚೇತಾ, ಶ್ರೀ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Monday 20 October 2014

Our Team got Championship in Manjeshwar Subdistrict Aquatics Championship held at Sheshapurusha Swimming Pool, Kodlamogaru

Wednesday 1 October 2014

ಕುಂಜತ್ತೂರು ಪ್ರೌಢಶಾಲೆಯಲ್ಲಿ ಬ್ಲಾಗ್ ಉದ್ಘಾಟನೆ
 ಕುಂಜತ್ತೂರು,ಒಕ್ಟೋಬರ್ 1: ಕುಂಜತ್ತೂರು ಸರಕಾರೀ ಪ್ರೌಢಶಾಲೆಯಲ್ಲಿ ಶಾಲಾ ಬ್ಲಾಗ್ ಉದ್ಘಾಟನೆಯನ್ನು ದಿನಾಂಕ  01-10-2014 ರಂದು ನೆರವೇರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಉದಯಶಂಕರ್.ಟಿ. ಅವರು ಬ್ಲಾಗ ನ್ನು ದೀಪ ಬೆಳಗಿಸಿ ಕಂಪ್ಯೂಟರ್ ಕ್ಲಿಕ್ ಮಾಡುವುದರ ಮೂಲಕ ಉದ್ಘಾಟಿಸಿದರು.ನಂತರ ಬ್ಲಾಗ್ ನ ಉಪಯೋಗಗ ಳ ಬಗ್ಗೆ  ಮಕ್ಕಳಿಗೆ ತಿಳಿಯಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಹಮ್ಮದ್ ಅಫ್ತಾಬ್ ಅವರು ವಹಿಸಿದ್ದರು.ಐ.ಟಿ.ಕೋ ಓರ್ಡಿನೇಟರ್ ಶ್ರೀ ಬಾಲಕೃಷ್ಣ.ಜಿ. ಅವರು ಬ್ಲಾಗ್ ನ ಬಗ್ಗೆ  ಪ್ರಾಸ್ತಾವಿಕವಾಗಿ ಮಾತನಾಡಿದರು.

         ಶಿಕ್ಷಕರಾದ ಶ್ರೀ ರಾಜಕುಮಾರ್  ಸ್ವಾಗತಿಸಿ  ಶಕ್ಷಕಿ ಶ್ರೀಮತಿ  ಸುಚೇತಾ ವಂದಿಸಿದರು.  ಶಿಕ್ಷಕರಾದ ಶ್ರೀ ದಿನೇಶ.ವಿ. ಕಾರ್ಯಕ್ರಮ ನಿರೂಪಿಸಿದರು.                                                                    ಬ್ಲಾಗ್  ವಿಳಾಸ:11009gvhsskunjathur.blogspot.in




School Blog Inaugurated & Dasara Naadahabba Celebrated on 01-10-2014

Thursday 18 September 2014


Our Student Police Cadets at Independence Day Celebrations at Muncipal Stadium, Kasaragod

Wednesday 10 September 2014

Onam & Teachers Day Celeberations

Onam & Teachers Day Celeberated in our School on 05-09-2014 with various programmes








ಗುರುವಂದನೆ ಮತ್ತು ಓಣಂ ಆಚರಣೆ
ಕುಂಜತ್ತೂರು: ಸೆ.5: ಕುಂಜತ್ತೂರು ಸರಕಾರೀ ಪ್ರೌಢಶಾಲೆಯಲ್ಲಿ ಸೆಪ್ಟಂಬರ್ 5ರಂದು ಬಹುಸಂಭ್ರಮದಿಂದ ಗುರುವಂದನೆ ಮತ್ತು ಓಣಂನ್ನು ಆಚರಿಸಲಾಯಿತು.ಶಿಕ್ಷಕರು ರಚಿಸಿದ 'ಪೂಕಳಂ'ನ ಮುಂದೆ ದೀಪವನ್ನು ಬೆಳಗುವುದರೊಂದಿಗೆ ಸಮಾರಂಭವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರ್.ಟಿ. ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಫ್ತಾಬ್ ಪಿ.ಸಿ. ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಹೂಗುಚ್ಛವನ್ನು ನೀಡುವುದರೊಂದಗೆ
ಗುರುಗಳನ್ನು ಗೌರವಿಸಿದರು.ಬಳಿಕ ಓಣಂ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ,ಹಗ್ಗ ಜಗ್ಗಾಟ,ಚೆಂಡಾಟ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ಓಣಂ ಭೋಜನ ಕೂಟವು ನಡೆಯಿತು.ಮಧ್ಯಾಹ್ನ ನಂತರ ಪ್ರಧಾನಮಂತ್ರಿಗಳೊಂದಿಗಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.

Wednesday 13 August 2014



STEPS- PTA Executive Committee & Staff Meeting held on 13-08-2014